Thursday, April 19, 2007

ಹೀಗೊಂದು ಕವನ!



ಇದು ನಾನೂ ಸಹ ಸಾಹಿತ್ಯದ ಎಲ್ಲಾ ಪ್ರಾಕಾರಗಳಲ್ಲೂ ಕೈಯಾಡಿಸಬೇಕೆಂಬ ಚಪಲಕ್ಕೆ ಬಿದ್ದು ಬರೆದು,ಬರೆದದ್ದನ್ನೆ ’ಕವನ’ಎಂದುಕೊಂಡು ನಾನೇ ಬೆನ್ನು ಚಪ್ಪರಿಸಿಕೊಂಡದ್ದು.ಬ್ಲಾಗಿಗೆ ಭೇಟಿ ನೀಡಿದ ಕರ್ಮಕ್ಕಾಗಿ ಇದನ್ನೂ ಓದುವ ಅನಿವಾರ್ಯ ಕರ್ಮ ನಿಮಗೆ.ನಿಮಗಾಗಬಹುದಾದ ಬೌದ್ದಿಕ ಶೋಷಣೆಗೆ ನಾನು ಹೊಣೆಯಲ್ಲ! :-)
*******************************************************************

ನನ್ನ ಕವನವೆಂದರೆ,
ಸತ್ತ ಶವದ ಹಣೆಯ ಮೇಲಿನ ಸಿಂಧೂರದಂತೆ|
ಘೋರ ಸಮಾಧಿಯ ಮೇಲೆ ನೆಟ್ಟ ತುಳಸಿಯಂತೆ|
ಘಟಸರ್ಪದ ಹೆಡೆಯ ಮೇಲಣ ಮುಕುಟದ ಮಣಿಯಂತೆ|
ವಸುಂಧರೆಯ ಒಡಲಲಿ ಕುದಿವ ಲಾವರಸದಂತೆ|
ಅಘೋರ ಕತ್ತಲಲಿ ಒಡಮೂಡಿದ ಕೊಲ್ಮೀಂಚಿನಂತೆ|
ರುಧ್ರರುಧಿರ ಸ್ನಾನಗೈದ ಉಗ್ರದುರ್ಗಿಯ ಖಡ್ಗದಂತೆ|
ಶೀತಲ ಹಿಮಾಲಯದ ತುದಿಯಲಿ ಸಿಡಿವ ಜ್ವಾಲಾಮುಖಿಯಂತೆ|
ಹಾದಿ ತಪ್ಪಿದ ಸೂಳೆಯ ಕೊರಳ ದೇದಿಪ್ಯಮಾನ ಮಾಂಗಲ್ಯದಂತೆ|
ನನ್ನ ಕವನವೆಂದರೆ,
ತಾಯಹಾಲ ಕುಡಿವ ಹಸೂಗೂಸಿನಂತಲ್ಲಾ,
ಅದು ಹಾಲಾಹಲವನೇ ಕುಡಿದು ಜಯಿಸಿದ ವಿಷಕಂಠನಂತೆ|

*******************************************************************
ಪೂರ್ತಿ ಕವನ(?)ಓದಿದ್ದರೆ Congrats..ನಿಮ್ಮ ತಾಳ್ಮೆಗೆ ಜಯವಿರಲಿ.

4 comments:

Anonymous said...

Artha aglilla sir.......

ಸಂತೋಷಕುಮಾರ said...

ಇರಲಿ ಬಿಡಿ,ಅರ್ಥ ಆಗದಿರೊದೆ ವಾಸಿ.ಕಷ್ಟ ಪಟ್ಟು ಅರ್ಥ ಮಾಡಿಕೊಳ್ಳುವಂತದ್ದೆನಿಲ್ಲ ಅದರಿಲ್ಲಿ..ಅಗಾಗ ಇಣುಕುತ್ತಿರಿ..

Unknown said...

ನ೦ಗಿಷ್ಟ ಆಯ್ತು

vani said...

Bhayankar!!!