Showing posts with label ಹರಟೆ. Show all posts
Showing posts with label ಹರಟೆ. Show all posts

Monday, February 25, 2008

"ಬಿಗ್" ಎಫ್.ಎಮ್ಮು ಮತ್ತು ಅವರ "ಬಿಗ್(?)" ಐಡಿರಿಯಾಗಳೂ...

ಬೆಂಗಳೂರಿನ ನಂ.1 ಚಾನೆಲ್ ಎಂದು ಗಂಟೆಗೊಮ್ಮೆ ಅರಚಿಕೊಂಡು, ತಮ್ಮನ್ನು ತಾವೇ ಸಮಾಧಾನಿಸಿಕೊಳ್ಳುವ ಸ್ವಯಂಘೋಷಿತ ನಂ೧ಗಳಿಗೆ ಕೆಳಗೆ ಹೇಳಿದಂತಹ ಕ್ರಿಯೇಟಿವ್ ವಿಷಯಗಳು "ಎಲ್ಲಿ" ಹೊಳೆಯುತ್ತವೆಯೋ ನಂಗಂತೂ ಗೊತ್ತಿಲ್ಲಾ.

ಕಾರಣ ಇಷ್ಟೇ! ಲಾರಿ ಮುಷ್ಕರದ ದಯೆಯಿಂದ ಲೇಟಾಗಿ ಹೋಗುವ ಬಾಗ್ಯಕ್ಕೆ ಖುಷಿ ಪಟ್ಟು ಬೆಳಗ್ಗೆ ಬೆಳಗ್ಗೆ ಎಫ್.ಎಮ್ಮು ತಿರುವಿದರೆ ’ಬಿಗ್ ಕಾಫಿ’ಯ ಹರ್ಷ ಚರ್ಚೆಗೆ ಆರಿಸಿಕೊಂಡ ವಿಷಯ " ನೀವು ಯಾರ ಜೊತೆ ’ಮಿಲನ’ ಬಯಸ್ತೀರಾ?" ಅಂತಾ!. ಈ ಹರ್ಷ ಎಂಬ ಆರ್,ಜೆಗೆ ಬೆಳಗ್ಗೆ ಬೆಳಗ್ಗೆ ಕಾಫಿ ಹೊತ್ತಿನಲ್ಲಿ ಇಂತಹ ವಿಷಯ ಯಾಕೆ ಹೊಳೆಯಿತೋ ನಾಕಾಣೆ. ಇಂತಹ ಸ್ವಾರಸ್ಯಕರ(?) ವಿಷಯಕ್ಕೆ ನಮ್ಮ ಬಿಗ್ ಕೇಳುಗ ಮಹಾಶಯರಂತೂ ಜೊಲ್ಲೊರಿಸಿಕೊಳ್ಳುತ್ತಾ ಕೊಟ್ಟ ಉತ್ತರಗಳಂತೂ ಇನ್ನೂ "ಕ್ರಿಯೆಟಿವ್" ಆಗಿದ್ದುವು. ಒಬ್ಬ ಪುಣ್ಯಾತ್ಮ ತನ್ನ ತನ್ನ ಮಾಜಿ ಪ್ರೇಯಸಿಯೋಂದಿಗೆ ಮಿಲನ ಬೇಕಾದರೆ, ಇನ್ನೊಬ್ಬ ರಸಿಕ ತನ್ನ ’ಅತ್ತೆ’ಯೊಂದಿಗೆ ಮಿಲನ ಬಯಸ್ತೀನಿ ಅಂತ ಮೇಸೆಜು ಕುಟ್ಟಿದ್ದ, ಅದನ್ನು ಓದಿದ ನಮ್ಮ ಹರ್ಷನಿಗೆ ಭಲೇ ಖುಷಿ. ಒಬ್ಬ
ಆಧುನಿಕ ನಾರಿಮಣಿಗೆ ತನ್ನ "ಲವ್ವರ್" ಜೊತೆ ’ಅದು’ ಬೇಕಂತೆ.. ಇವರ ಭಂಡ ದೈರ್ಯಕ್ಕೆ ಕಂಡು ನಂಗೆ ತುಂಬಾ ಆಶ್ಚರ್ಯ ಆಯ್ತು.. ಇವು ಕೆಲ ಸ್ಯಾಂಪಲ್ಲುಗಳಷ್ಟೆ, ಇನ್ನೂ ಕೇಳಿದರೆ ಕಿವಿ ಹೊಲಸಾದೀತು ಅಂತಾ ’ಹೆಚ್ಚಾಗಿ ಕನ್ನಡ ಹಾಡುಗಳ’ ಚಾನೆಲ್ಲಿಗೆ ವಲಸೆ ಹೋಗಬೇಕಾಯ್ತು..

ಮತ್ತೆ ಅದೆ ದಿನ ಸಂಜೆ, ಅದೇ ಬಿಗ್ ನಲ್ಲಿ " ನೋ ಟೆನ್ಸನ್" ನಲ್ಲಿ ದೀಪು ಯವುದೋ ಟೀಚರ್ರಿಗೆ ಕರೆ ಮಾಡಿ, ನಿಮ್ಮ ಸ್ಟೂಡೆಂಟ್ ಒಬ್ಬ ನಿಮ್ಮ ಜೊತೆ ಮಲ್ಪೆ ಟೂರಿಗೆ ಹೋಗಿ ಬಂದಾಗಿನಿಂದ ’ಲವ್’ ಮಾಡುತ್ತಿರುವನೆಂದೂ, ನಾನು ಆ ಹುಡುಗನ ಚಿಕ್ಕಪ್ಪನೆಂದೂ ಕೊಡಬಾರದ "ಟೆನ್ಸನ್" ಕೊಡತೊಡಗಿದ.ಪಾಪ ಆ ಟೀಚರ್ರು ಕಂಗಾಲು.

ಮಾದ್ಯಮಗಳು ಒಂದು ಸಮುದಾಯದ ಅಭಿಪ್ರಾಯ ರೂಪಿಸುತ್ತವೆ ಅಂತಾರೆ, ಆದ್ರೆ ಇವರು ರೂಪಿಸುತ್ತಿರುವ ಅಭಿಪ್ರಾಯಗಳಾದರೂ ಎಂತವು?. ತೀರಾ ಈ ಮಟ್ಟದ ಕೀಳು ವಿಚಾರಗಳನ್ನು ಚರ್ಚಿಸುವ ಅಥವಾ ಅಂತಹ ಅಡ್ಡ ಹಾದಿಯಿಂದ "ಟೆನ್ಸನ್" ಕೊಡುವ ದರ್ದಾದರೂ ಏನಿತ್ತು ಅಂತಾ!. ಕನಿಷ್ಟ ಮಟ್ಟದ ಸಾಮಾಜಿಕ ಜಾವಾಬ್ದಾರಿಗಳು ಇವರಿಗೆ ಬೇಡವೆ?. ಎನೇ ಆದರೂ ಸಬ್ಯತೆಯ ಎಲ್ಲೆ ದಾಟುವುದು ನಂಗ್ಯಾಕೋ ಸರಿ ಎನಿಸಲಿಲ್ಲಾ. ಅಷ್ಟಕ್ಕೂ ’ಆ’ ತರದ ವಿಷಯಗಳ ಮೂಲಕ ಇವರು ಸಾಧಿಸ ಹೊರಟಿರುವ ಕ್ರಾಂತಿಯಾದರೂ ಏನು?. ’ಬೇರೆ’ ಎನೋ ಉಪಯೋಗಿಸದೆ ತಲೆ ಉಪಯೋಗಿಸಿ ಯೋಚಿಸಿದರೆ ಚರ್ಚಿಸಲು ಸಾವಿರಾರು ಸಮಸ್ಯೆಗಳಿವೆ, ಸದಭಿರುಚಿಯ ವಿಷಯಗಳಿವೆ.ಎನೋ ಗೊತ್ತಿಲ್ಲಪ್ಪಾ! ಕ್ರಿಯೇಟಿವಿಟಿ ಸೊಂಟದ ಕೆಳಗೇಯೇ ಹುಟ್ಟಬೇಕಾ?

ದೀಪು, ದೇವರಾಣೆಗೂ ನಾವು " ಆ " ಟೈಪಲ್ಲಪ್ಪಾ!!!

Monday, August 27, 2007

ನೀವೇನಂತೀರಾ????????

ನಿನ್ನೆ ರಾತ್ರಿ ಮಲಗುತ್ತಿದ್ದಾಗ ಯಾಕೋ ಅಪರೂಪಕ್ಕೆ ಎಂಬಂತೆ " ರೀ ಸಂತೋಷರ, ನಾಳೆ ನಾನ್ನೂ ಲಗೂ ಎಬ್ಬಿಸ್ರಿ" ಅಂತ ಭಿನ್ನಹ ಮಾಡಿಕೊಂಡ. ಆಶ್ಚರ್ಯಚಕಿತನಾಗೆ ನಾನು " ಯಾಕೋ ಮತ್ತೆ ಕ್ರಿಕೆಟ್ ತಾಲೀಮು ಶುರುನಾ?" ಎಂದೆ ಮಾಮುಲಿನಂತೆ.

ನಖಶಿಖಾಂತ ಉರಿದು ಹೋಯ್ತು ಸೂರ್ಯವಂಶಿ " ಕಾಲೇಜು ಮತ್ತೆ ಶುರು ಆಗಿದೆ ಅಂತ ಸಾವಿರ ಸಲ ಬಡ್ಕೊಂಡಿದೀನಿ ಬೆಳಗ್ಗೆಯಿಂದ, ಮತ್ತೆ ಅದನ್ನೆ ಕೇಳ್ತಿರಲ್ಲಾ?" ಅಂದ ಸಿಟ್ತಿನಲ್ಲಿ.

"ಅಲ್ವೋ ಕಾಲೇಜನ್ನ ಅದರ ಪಾಡಿಗೆ ಬಿಟ್ಟು ತುಂಬ ದಿನ ಅಯ್ತಲ್ಲೋ? ಈಗೇನು ಒಮ್ಮೆಲೆ ಕಾಲೇಜು ನೆನಪಾಗಿದೆ ಸಾಹೇಬರಿಗೆ, ಎನ್ ವಿಷಯ, ಹೊಸ ಲವ್ವಾ?" ಎಂದು ಕಾಲೆಳೆದೆ.( ಈ ಪ್ರಾಣಿ ನಾವೆಲ್ಲಾ ಇಂಜಿನಿಯರಿಂಗ್ ನ ಕೊನೆಯ ವರ್ಷಕ್ಕೆ ಬಂದಾಗ ಹೆದರಿ ಹೆದರಿ ಕಾಲೇಜು ತಪ್ಪಿಸುತ್ತಿದ್ದರೆ, ಈ ಸೂರ್ಯವಂಶಿ ಕಾಲೇಜು ಸೇರಿದ ಹೊಸದರಲ್ಲೇ ಎಲ್ಲಾ ಕ್ಲಾಸುಗಳಿಗೆ ಅಪರೂಪವಾಗಿಬಿಟ್ಟಿದ್ದ, ಚಳಿಗಾಲದಲ್ಲಂತೂ ಮುಂಜಾನೆಯ ಕ್ಲಾಸುಗಳಿಗೆ ಈ ವಯ್ಯಾ ಹೋಗುವದೇ ಇಲ್ಲಾ! ಎಷ್ಟೊ ಸಾರಿ ಇಂತಹ ಶೀಷ್ಯೊತ್ತಮನನ್ನೂ ಕರೆಸಿ ಇವರ ದರ್ಶನಭಾಗ್ಯವನ್ನು ಅನೇಕ ಅದ್ಯಾಪಕರು ಪಡೆಯಬೇಕಾಗಿತ್ತು.. ಅಷ್ಟು ದುರ್ಲಭವಾಗಿದ್ದ ಇವನು.)

ಸ್ವಲ್ಪ ದನಿ ತಗ್ಗಿಸಿ ಹೇಳಿದ" ಎಲ್ರೂ ಕೊನೆಯ ವರ್ಷಕ್ಕೆ ಕಾಲೇಜಿಗೆ ಹೋಗಲ್ವಂತೆ, ಆದ್ರೆ ನಾ ಮಾತ್ರ ಈ ವರ್ಷನಾದ್ರೂ ರೆಗ್ಯುಲರ್ ಆಗಿ ಹೋಗಬೇಕು ಅಂತ ಅನ್ಕೊಂಡಿನಿ" ಅಂದ..
ಓಹೋ ಸಾಹೇಬರು ಇನ್ನೂ ಅನ್ಕೊಂಡಿದಾರೆ ಅಂದುಕೊಂಡು ನಗುತ್ತಾ " ನಿಮ್ಮ ಪ್ರಿನ್ಸಿಗೆ ಹೇಳಿದ್ದರೆ ಇಡಿ ಕಾಲೀಜೆಗೆ ಸ್ವೀಟ್ ಹಂಚಿರೋರು, ನಿಮ್ಮಂತಹ ಪ್ರಕಾಂಡ ಪಂಡಿತರ ಪುನರಾಗಮನದ ಖುಷಿಗೆ" ಎಂದೆ.

"ನಿಮ್ದೂ ಮಸ್ಕೀರಿ ಭಾಳ ಆತು, ನಾ ನಿಮ್ಮನ್ನ ಒಂದ ಮಾತು ಕೇಳಲಾ?" ಅಂದ ಮನೋಜ್..

ನಮ್ ಸಿಕ್ಸ್ತ್ ಸೆನ್ಸು ಆಗ್ಲೆ ನಮ್ಮನ್ನು ಎಚ್ಚರಿಸತೊಡಗಿತು, ಆದ್ರೂ ಎನು ಈ ನನ ಮಗ ಯಾವಗ್ಲೂ ಕೇಳಿಯೇ ಹೇಳೊದು ಅಂತಾ ಗೊಣಕ್ಕೊಂಡು " ಹೊತ್ತಾಗೈತಿ ಬೇಗ ಹೇಳಿ ಮುಗಿಸು, ಬೆಳಗ್ಗೆ ಬೇಗ ಬೇರೆ ಏಳಬೇಕು ನೀನು" ಅಂದು ಸೂಕ್ಷ್ಮವಾಗಿ ಹೇಳುವ ಯತ್ನ ಮಾಡಿದೆ.

ಮಾತೂ ಮುಗಿಸುವದೇ ತಡ ಚಕ್ಕನೇ ಎದ್ದವನೇ ಒಳಗೆ ಹೋಗಿ ವಿಜಯ ಕರ್ನಾಟಕ ಪತ್ರಿಕೆಯ " ಮಹಿಳಾ ವಿಜಯ"ದ ಸಂಚಿಕೆಗಳನ್ನು ನನ್ನ ಮುಂದೆ ಗುಡ್ದೆ ಹಾಕಿ " ನೋಡ್ರಿ ಸಂತೋಷರಾ, ಎನೀದರ ಅರ್ಥ? ಎಂದು ಸ್ವಲ್ಪ ಸೀರಿಯಸ್ಸಾಗೇ ಕೇಳಿದ.

ಏನು ನೋಡುವದು ಮಣ್ಣು, ಅರ್ಥ ಆದ್ರೆ ತಾನೆ? ಆದ್ರೆ ಮನಸ್ಸಿನ ಮೂಲೆಯಲ್ಲಿ ಏ ಮನುಷ್ಯನ ಹೊಸ ಸಂಶೋಧನೆಯ ಬಗೆಗೆ ಕೂತುಹಲ ಮೂಡತೊಡಗಿತು, ಕೊನೆಗೆ ಸೋತವನಂತೆ " ರಾತ್ರೀಲಿ ಯಾಕೋ ಪೇಪರ್ ತೋರಿಸಿ ಪ್ರಾಣ ತಿಂತೀಯಾ? ಎನೂ ಅಂತ ಬಿಡಿಸಿ ಹೇಳ್ಬಾರದಾ?" ಅಂತ ಅಲವತ್ತುಕೊಂಡೆ.

ಛಲ ಬಿಡದ ತ್ರಿವಿಕ್ರಮನಂತೆ "ಸ್ವಲ್ಪ ಗಮನಿಸಿ ನೋಡಿ, ಪ್ಲೀಸ್ ಪ್ಲೀಸ್ " ಅಂದ.

ಇದೋಳ್ಳೆ ಗೋಳಾಯ್ತಲ್ಲಾ ಅಂದುಕೊಂಡು ಗಮನಿಸಿದರೆ ಎಲ್ಲಾ ಸಹಜಾರ "ಬಾಲ್ಕನಿಯಿಂದ" ಅಂಕಣದ ಪೇಪರುಗಳು, ಯಾಕೋ ಕೇಸು ಸೀರಿಯಸ್ಸೆ ಅನಿಸಿ " ನಾ ಎಲ್ಲ್ಲಾ ಓದೀದಿನಿ, ನಿನ್ನ ಪ್ರಾಬ್ಲಮ್ ಏನು ಶಿವಾ?" ಅಂದು ಬೇಸರಿಸಿಕೊಂಡು ಹೇಳಿದೆ.

" ಅದಲ್ರೀ ಫೋಟೊ ನೋಡ್ರಿ ಫೋಟೊ " ಅಂದು ಹಲ್ಕಿರಿದ.

" ನೋಡ್ದೆ, ಎನಾಯ್ತಿಗ?" ಎಂದು ಖಾರವಾಗಿ ಕೇಳಿದ್ದಕ್ಕೆ

" ಅಲ್ಲೇ ಇರೋದು ಪಾಯಿಂಟು, ಅಲ್ಲಾ ಆಕಿಗೆ ತನ್ನ ಐಡೆಂಟಿಟಿ ತೋರಿಸೋದು ಇಷ್ಟ ಇಲ್ಲಾ ಅಂದ್ರೆ ಈ ಫೋಟೊನೂ ಹಾಕಬಾರದಿತ್ತು,ಆದ್ರು ನಮ್ ಕಡೆ ಬೆನ್ನು ತಿರುಗಿಸಿದ ಫೋಟೋ ಇದೆ, ಏನಿದರ ಅರ್ಥ?" ಎಂದು ಕೊನೇಗೂ ಬಾಯಿಬಿಟ್ಟ..

ಹೌದಲ್ಲವೇ ಅನ್ನಿಸಿತು ಒಂದು ಕ್ಷಣ ಆದ್ರೂ ಮಾತು ಮೂಂದುವರೆಸಲು ಇಷ್ಟವಿಲ್ಲದೆ " ಅವರವರ ಇಷ್ತ ಬಿಡೊ, ಬೇಕಾದ ಮಾಡ್ಕೊಳ್ಲಿ ಮತ್ತು ಬೇಕಾದ್ದು ಫೋಟೊ ಹಾಕ್ಕೊಳ್ಲಿ ನೀ ಯಾಕೆ ಚಿಂತಿ ಮಾಡ್ತಿ, ಈಗ ಮಲಗು" ಅಂದೆ..

" ನಿಮಗೆ ಎಲ್ಲಾ ಸಿಲ್ಲಿಯಾಗೇ ಕಾಣೊದು, ಅದು ಉದ್ದೇಶಪೂರ್ವಕವಾಗಿ ಹಾಕಿರೋ ಫೋಟೊ," ಎಂದು ಜಗ್ಗ್ಗನ್ನೆತ್ತಿ ಗಟಗಟ ನೀರು ಕುಡಿದವನೆ ಮತ್ತೆ ಶುರು ಮಾಡಿದ ಅವನ ಬಾಯಿಂದನೆ ಕೇಳಿ
" ನೋಡ್ರಿ ಸಂತೋಷರ, ಇದೂ ಎಲ್ಲಾ ಹುಡುಗ್ಯಾರ ಲಕ್ಷಣ, ಕೆಲ ಹುಡುಗಿಯರಿಗೆ ನಾವು ಚಂದ ಅದೀವಿ ಅನ್ನೊದು ಗೊತ್ತಿರ್ತದ, ಮತ್ತು ಫೋಟೊ ಹಾಕಿ ತಮ್ಮ ಐಡೆಂಟಿಟಿ ಬಿಟ್ಟುಕೊಡಲೂಬಾರದು ಅಂತ ಚೆನ್ನಾಗಿ ಗೊತ್ತಿರುತ್ತೆ. ಹಾಗಂತ ಸುಮ್ನಿರೋದು ಇಲ್ಲಾ, ಅರ್ಧ ಮರ್ಧ ಮುಖಾ ತೋರಿಸಿ ನಮ್ ಹುಡುಗ್ರ್ ಕೂತುಹಲ ಹೆಚ್ಚಿಸ್ತಾರ. ಅದು ಬೇಡಾ ಅಂದ್ರ ಪೂರಾ ಫೋಟೊ ಹಾಕಬೇಕು, ಇಲ್ಲಾಂದ್ರೆ ಹಾಕಲೇಬಾರದಿತ್ತು, ಬಿಟ್ಟಿದ್ರೆ ಏನು ಗಂಟು ಖರ್ಚಾಕ್ತಿರಲಿಲ್ಲ್ಲ. ಈ ತರ ನಮ್ ತಲಿಯಾಗ ಹುಳ ಬಿಡ್ದಕ ಹೀಂಗ್ ಮಾಡ್ತಾರ, ಬನ್ನಿ ಬೇಕಾದ್ರ ಆರ್ಕುಟನ್ಯಾಗ್ ನಮ್ಮ್ ಕಾಲೇಜಿನ ಮಸ್ತ ಮಸ್ತ ಹುಡುಗ್ಯಾರು ಸಹ ಅರ್ಧ ಮರ್ಧ ಫೊಟೊ ಹಾಕೀರೊದನ್ನ ತೋರೊಸ್ತಿನಿ, ಹಿಂತಾ ಸಾಕಷ್ಟು ಹುಡುಗ್ಯಾರ್ನ್ ತೋರಿಸ್ತಿನಿ. ಅವರ ಉದ್ದೀಶವೇ ಅರ್ಥ ಆಗೊಲ್ಲಾ? ಅವರು ಏನು ಅನ್ಕೊಂಡು ಹೀಗೆ ಮಾಡ್ತಾರೆ? ಅವರ ಸೈಕಾಲಜಿ ಏನು?" ಅಂತೆಲ್ಲಾ ಪ್ರಶ್ನಾವಳಿಗಳನ್ನು ಎಸೆದು ನನ್ನ ಕಡೆಗೆ ನೋಡಿದ..

ನಂಗೂ ಈ ಪುಣ್ಯಾತ್ಮನ ಮಾತುಗಳು ತುಸುವಾದರು ಹೌದೆನಿಸಿತು, ಅದರೆ ಅವನ ಪ್ರಶ್ನೆಗಳಿಗೆ ಉತ್ತರ ಮಾತ್ರ ದೇವರಾಣೆಗೆ ಹೋಳೆಯಲಿಲ್ಲ.ಅದಕ್ಕೆ ನೀವೆನಂತೀರಾ ಅಂತ ಪೊಸ್ಟಿಸಿದ್ದೇನೆ, ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ..

( ಇದನ್ನು ಇಬ್ಬರ ಕುತೂಹಲಿ ಬ್ರಹ್ಮಾಚಾರಿಗಳ ಸಂಭಾಷಣೆ ಎಂದೊ ನೋಡಿರಿ ಹೊರತು ಇದರ ಹೀಂದೆ ಯಾವುದೋ ಘನ ಉದ್ದೇಶಗಳಿಲ್ಲ್ಲಾ! ಕೇವಲ ತಮಾಷೆಭರಿತ ಕೂತುಹಲದಿಂದ ಇದನ್ನು ಪ್ರಕಟಿಸಿದ್ದೇನೆ, ಯಾರಿಗಾದರೂ ನೋವಾದರೆ ಕ್ಶಮಿಸುವ ದೊಡ್ಡತನವಿರಲಿ)